ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Sunday, March 8, 2015

ತುಳು ಭಾಷೆಯ ಪ್ರೀತಿ , ಲಿಪಿ ತಯಾರಿಸಿದ ಶ್ರಮ ಜೀವಿ

೦ಚ ದ್ರಾವಿಡ ಭಾಷೆಗಳಲ್ಲಿ ಒ೦ದೆನಿಸಿರುವ ತುಳು ಭಾಷೆಗೆ ಸತತ ಪರಿಶ್ರಮ ಮತ್ತು ಸ್ವ ಪ್ರಯತ್ನ ದಿ೦ದ ಹೊಸ ತುಳು ಲಿಪಿಯನ್ನು ಆವಿರಷ್ಕಾರಸಿದವರು ಮೋಹನ್ ಬೋಳಾರ್.ತನ್ನದೇ ಒ೦ದು ಮಟ್ಟದಲ್ಲಿ ಅಕ್ಷರವನ್ನು ಜೋಡಿಸಿ ಅದನ್ನು ಓದುವ ಹವ್ಯಾಸವನ್ನು ಬೆಳೆಸಿಕೊ೦ಡರು.ಸುಮಾರು ಹನ್ನೆರಡು ವರ್ಷಗಳ ಹಿ೦ದೆಯೇ ತಾನು ಸಿದ್ದ ಪಡಿಸಿದ ಲಿಪಿಯನ್ನು ಕ೦ಪ್ಯೂಟರ್,ಬೆರಳಚ್ಚು,ಮತ್ತು ಅಚ್ಚಕ್ಷರಗಳಿಗೆ ಸುಲಭವಾಗಿ ಅಳವಡಿಸುವ೦ತೆ ಮಾರ್ಪಾಡು ಗೊಳಿಸಿದ್ದಾರೆ.ಈ ಹಿ೦ದೆ ತುಳುವಿಗೆ ತಿಕಳಾರಿ ಎ೦ಬ ಲಿಪಿಯಿ೦ದ ಬರವಣಿಗೆ ಸಾಧ್ಯವಿದೆ ಎ೦ಬ ಅಭಿಪ್ರಾಯ ವೇದ್ಯವಾಗಿದ್ದರೂ ತಿಕಳಾರಿ ಎ೦ಬುದು ತುಳು ಲಿಪಿ ಅಲ್ಲವೆ೦ದು ಕರ್ನಾಟಕದ ಉದ್ದಗಲಕ್ಕೆ ಹರಡಿಕೊ೦ಡಿರುವ ಹಲವಾರು ವಿದ್ವಾ೦ಸರನ್ನು ಸ೦ಪರ್ಕಿಸಿದಾಗ ಇವರಿಗೆ ತಿಳಿಯಿತು.ಈ ಮಧ್ಯೆ 12 ವರ್ಷದ ಮೊದಲಿನ ಲಿಪಿಯ ಆವಿರಷ್ಕಾರವನ್ನು ಸ೦ಸ್ಕೃತ ಪ೦ಡಿತರಾದ ಬಿ. ಎಲ್ ನಾಗರಾಜ್ ರವರು ಮೋಹನ್ ರವರ ಲಿಪಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರೂ ಯಾರು ಕೂಡ ಗಮನ ಹರಿಸಿಲ್ಲ.,ಹಾಗಾಗಿ ಲಿಪಿ ಹೊರಬರುವಾಗಲೇ 25 ವರ್ಷ ಮೂಲೆಗು೦ಪಾಗಿತ್ತು .ಈಗ ಇತಿಹಾಸದ ಪುಟ ಸೇರಿದೆ .

ಇವರ ತುಳು ಲಿಪಿಯಲ್ಲಿ 33 ವರ್ಣಮಾಲೆಗಳು ಮಾತ್ರ ಇವೆ.ತಳು ಸಾಹಿತ್ಯ ಅಕಾಡೆಮಿ ಯಾವುದೇ ಪ್ರೋತ್ಸಾಹ ನೀಡದೇ ಇದ್ದುದ್ದರಿ೦ದ ಈ ನನ್ನ ಸಾಧನೆಗೆ ಇನ್ನಡೆಯಾಯಿತು ಎನ್ನುವುದು ಅವರ ಒಳಧ್ವನಿಯಿಂದ ಬರುವ  ಮಾತು . ಮೋಹನ್ ಬೋಳಾರ್ ರವರ ತುಳು ಲಿಪಿಯ ಬಗೆಗಿನ ಆಸಕ್ತಿ ಮತ್ತು ಪರಿಶ್ರಮವನ್ನುಶ್ಲಾಘಿಸಿ,ಹಿರಿಯ ಜಾನಪದ ತಜ್ಞ ಪ್ರೊ. ಅಮ್ರುತಸೋಮೇಶ್ವರ, ಅ೦ದಿನ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೊಳಲಿ ಮತ್ತು ಹಿರಿಯ ಗಡಿನಾಡ ಕವಿ ಕಯ್ಯಾರ ಕಿಞ್ಞಣ್ಣ ರೈ ಶಿಫಾರಸು ಪತ್ರವನ್ನು ನೀಡಿದ್ದರು.
ಮೋಹನ್ ಬೋಳಾರ್ ಆವಿರಷ್ಕಾರಮಾಡಿರುವ ಲಿಪಿಯ ಬಗೆಗೆ ವಿದ್ವಾ೦ಸರ ಅಭಿಪ್ರಾಯಗಳು
@ ಕಯ್ಯಾರ ಕಿಞ್ಞಣ್ಣ ರೈ ರವರ ಮನದಾಳದ ಮಾತು:-
“ಇಷ್ಟೊ೦ದು ಆಳವು ವಿಶಾಲವೂ ಆದ ತುಳು ಲಿಪಿಗೆ ಇ೦ದಿನ ವೈಜ್ಞಾನಿಕ ಪ್ರಗತಿ ಯುಗದ ಧರ್ಮದ೦ತೆ ಸಾರ್ವತ್ರಿಕವಾಗಿ ಉಪಯೋಗಕ್ಕೆ ಅನುಕೂಲವಾಗುವ೦ತೆ ಮುದ್ರಣಕ್ಕೆ,ಬೆರಳಚ್ಚಿಗೆ,ಕ೦ಪ್ಯೂಟರ್ ಗೆ ಸಹಕಾರಿಯಾಗುವ೦ತೆ ಹೊ೦ದಿ ಬರಲುಶ್ರೀ ಮೋಹನ್ ಬೋಳಾರ್ ರವರು ಸಾಹಸ ಕೆಲಸ ಮಾಡಿದ್ದಾರೆ.ಇದೊ೦ದು ಹೊಸ ಆವಿಸ್ಕಾರ.ಈ ಲಿಪಿ ಎಲ್ಲಾ ಭಾಷೆಗಳ ಉಪಯೋಗಕ್ಕೆ ಅನುಕೂಲವಾಗಿರುವುದರಿ೦ದ ಸ್ವಾಗತಾರ್ಹವಾಗಿದೆ.ಬೋಳಾರರ ಹೊಸ ತುಳು ಅಕ್ಷರ ಮಾಲೆ ನಾಡಿನಾದ್ಯ೦ತ ಜನಪ್ರಿಯವಾಗಲಿ
@ ಹಿರಿಯ ಜಾನಪದ ತಜ್ಞ ಪ್ರೊ ಅಮೃತ ಸೋಮೇಶ್ವರ:-
“ಲಿಪಿಯೂ ಒ೦ದು ಅಭಿಮಾನದ ಸ೦ಕೆತವಾಗಿದೆ.ತುಳುವಿನ ಬರವಣಿಗೆಗೆ ಬೇರೆ ಲಿಪಿ ಬೇಕೆ೦ಬ ಬಯಕೆಯೂ ಪ್ರಯತ್ನವೂ ಆಗಾಗ ಪ್ರಕಟವಾಗಿದೆ.ಹೊಸ ಆವಿರಷ್ಕಾರದ ಕನಸೀನು ತಪ್ಪಲ್ಲ.ಆದರೆ ಭಾಷೆ ಲಿಪಿ ಇತ್ಯಾದಿಗಳೆಲ್ಲ ಜನ ಸಮಸ್ಟಿಯ ಸೊತ್ತುಗಳು. ಮೋಹನ್ ಬೋಳಾರ್ ರವರ ನಿರ-ತಾರಾ ಸಾಧನೆ ತುಳುವಪ್ಪೆಯ ವಿಚಾರದಲ್ಲಿ ಅವರ ವೀರಭಕ್ತಿ ನಿಜವಾಗಿಯೂ ಶ್ಲಾಘ್ಯ.ಇವರ ಕಲಾವಿದ ಪ್ರಜ್ಞೆ ಚೆನ್ನಾಗಿ ಕೆಲಸ ಮಾಡಿದೆ.ಈ ಲಿಪಿಯನ್ನು ತುಳುವಿಗೆ ಮಾತ್ರವಲ್ಲದೆ ಇತರ ಭಾಷೆಗಳನ್ನೂ ಬರೆಯಲು ಬಳಸಬಹುದು.ಯೋಗ್ಯ ಪ್ರೋತ್ಸಾಹ ದೊರೆಯಲೆ೦ದು ಹಾರೈಸುತ್ತೇನೆ"
ತುಳು ಲಿಪಿಯಲ್ಲಿ ರಾಷ್ಟ್ರಗೀತೆ
@ ಬಾಲಕೃಷ್ಣ ಶೆಟ್ಟಿ ಪೊಳಲಿ:-
“ತುಳು ಬಾಸೆಗ್ ಅಯಿತ್ತನೆ ಒ೦ಜಿ ಲಿಪಿ ಉ೦ಡು ಪ೦ಡ್ ದ್ ಪ೦ಡಿತ ವೆ೦ಕಟರಾಜ ಪುಣಿ೦ಚತ್ತಾಯೆ ರ್ ತೋಜಾದ್ ಕೊರ್ತೆರ್.ಆ ಸಾದಿಟೆ  ಮೋಹನ್ ಲಾ ಚಿ೦ತನೆ ಮಲ್ತೆರ್ ಇ೦ಚಿತ್ತಿ ಕೆಲಸೊಗು ಬೆರಿ ಬೊಟ್ಟುನ ಅಗತ್ಯ.ಅರೆನ ಉಮೇದ್ ನಾನಲ ಬುಲೆವಡ್”
@ ಕೆ.ಕೆ ಗಟ್ಟಿ:-
“ಮೋಹನ್ ಬೋಳಾರ್ ರವರಈ ಅಕ್ಷರ ಆವಿರಷ್ಕಾರವನ್ನು ಎಲ್ಲರೂ ಮುತುವರ್ಜಿಯಿ೦ದ ಬಳಸಿ ಅಭ್ಯಾಸಿಸಿದರೆ ೨೬ ಅಕ್ಷರಗಳ ಇ೦ಗ್ಲಿಷ್ ನ೦ತೆ ಎಲ್ಲಾ ಭಾಷೆಗಳಿಗೂ ಮೂಲಾಕ್ಷರವಾಗಿ ಬಳಕೆಗೆ ತರಬಹುದು.ಇಲ್ಲಿ ಭಾಷೆ ತಿಳಿದಿದ್ದರೆ ಸಾಕು.ಇದರಲ್ಲಿ ಮುಖ್ಯಪಾಲು ಇದರ ಬಗ್ಗೆ ನಾಡಿನ ಪ್ರತಿಷ್ಟಿತರ ಮತ್ತು ವಿದ್ವಾ೦ಸರ ಸಹಕಾರ ಅಗತ್ಯ"

ಇಷ್ಟೆಲ್ಲಾ ಕೆಲಸ ಮಾಡಿರುವ ಮೋಹನ್ ಬೋಳಾರ್ ರವರ ಲಿಪಿ ಬಗ್ಗೆ ಈಗ ಯಾರು ಕೂಡ ಮಾತಾಡುತ್ತಿಲ್ಲ.ಕೆಲವರು ಇದು ಲಿಪಿಯೇ ಅಲ್ಲ ಎ೦ಬ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.ಮಾನ್ಯತೆ ಸಿಗದೇ ಹೋದರೂ ಇವರ ಈ ಪ್ರಯತ್ನಕ್ಕೆ  ಇವರನ್ನು ಗೌರವಿಸಲೇ  ಬೇಕು ."ತೌಳವ ಬಾಳ್ಗೆ ತೌಳವ೦ಗೆಲ್ಗೆ" ಎನ್ನುವ ಮಾತು ಅರ್ಥಪೂರ್ಣವಾದಿತೆ?
 ಮೋಹನ್ ಬೋಳಾರ್

ನನ್ನ ಈ ಲೇಖನ ಓದಿ ಅನೇಕ ಫೇಸ್ಬುಕ್ ಸ್ನೇಹಿತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

@Lakshmi G Prasad ಒಂದು ಲಿಪಿಯ ಆವಿಷ್ಕಾರ ಸಣ್ಣ ಸಾಧನೆಯಲ್ಲ ,ಲಿಪಿಗೆ ಭಾಷೆಯ ಹಂಗಿಲ್ಲ ,ಇದನ್ನು ಯಾವುದೇ ಭಾಷೆಗೂ ಬಳಸಬಹುದು ,ಲಿಪಿ ಇಲ್ಲದ ಭಾಷೆಯ ಬಳಕೆಗೆ ಇದು ಹೆಚ್ಚು ಸೂಕ್ತವಾದುದು ,ತುಳು ಭಾಷೆ ಸಂಸ್ಕ್ರತಿ ಮೇಲಿನ ಅಭಿಮಾನದಿಂದ ಇದನ್ನು ಸಿದ್ಧ ಪಡಿಸಿರುವ ಅವರ ಪ್ರಯತ್ನ ಶ್ಲಾಘ್ಯ .ಅದನ್ನು ಗುರುತಿಸುವಬೇಕು ಕೂಡ .ಆದರೆ ತುಳು ಭಾಷೆಗೆ ಅದರದ್ದೇ ಆದ ಲಿಪಿ ಇದ್ದ ಬಗ್ಗೆ ,ತುಳು ಭಾಷೆಯಲ್ಲಿ ರಚಿತವಾದ ಕೃತಿಗಳನ್ನು ಸಂಗ್ರಹಿಸಿರುವ ಡಾ.ವೆಂಕಟರಾಜ ಪುಣಿಚಿತ್ತಾಯರು ತಿಳಿಸಿ ಅದನ್ನು ನಿರೂಪಿಸಿದ್ದಾರೆ ,ಅದು ಶಾಸನದಲ್ಲಿಯೂ ಬಳಕೆ ಆಗಿದೆ ,ಇದನ್ನು ಲಿಪಿ ತಜ್ಞರು ತಿಗಳಾರಿ/ಗ್ರಂಥ ಲಿಪಿ ,ತುಳು ಲಿಪಿಯಲ್ಲ ಎಂದು ಕೂಡ ಅಭಿಪ್ರಾಯ ಪಟ್ಟಿದ್ದಾರೆ ,ಏನೇ ಇದ್ದರೂ ಇದನ್ನು ಕೂಡ ನಿತ್ಯದ ಬಳಕೆಗೆ ತರುವುದು ಕಷ್ಟ ಸಾಧ್ಯವಾಗಿದೆ ,ಪ್ರಸ್ತುತ ತುಳು ಭಾಷೆಗೆ ಇಲ್ಲಿನ ಜನ ತಿಳಿದಿರುವ ಕನ್ನಡ ಲಿಪಿಯೇ ಸೂಕ್ತವಾಗಿದೆ ,ತುಳು /ತಿಗಳಾರಿ ಯಲ್ಲಿರುವ ಕೃತಿಗಳ ಲಿಪ್ಯಂತರ ,ಹಾಗೂ ಲಿಪಿಯ ಉಳಿಕೆ ಹಾಗೂ ಬಳಕೆಗಾಗಿ ಇದನ್ನೂ ಕಲಿಯಬೇಕು ಕಲಿಸಬೇಕು ,ಆಸಕ್ತರು ಮೋಹನ್ ಬೋಳಾರ್ ಆವಿಷ್ಕರಿಸಿದ ಲಿಪಿಯನ್ನೂ ಕಲಿಯಬಹುದು.
@Gvs Ullal 
aklaklena swanthag malthina lipin tulu lipi panpunu thappu. bolar olaandala tulu lipi shaasana hasthaprathi iththnda aarna lipitha aadhaarad odhere aapundaandh thuvad. bokka academyn dhoorad

@Sinchana Shyam ಮಲೆಯಾಳಿ ಅಕ್ಷರ ಗಳಿರುವ ಲಿಪಿಯನ್ನು ತುಳು ಲಿಪಿಯೆಂದು ಗುರುತಿಸಿರುವುದು ನಮ್ಮೆಲ್ಲರ ದೌರ್ಭಾಗ್ಯ ಎಂದೇ ಹೇಳ ಬೇಕು...ಯಾಕೆಂದರೆ ಮೋಹನ್ ಬೋಳಾರ್ ರವರ ತುಳು ಲಿಪಿಯಲ್ಲಿ ಒಂದೇ ಒಂದು ಮಲೆಯಾಳಿ ಅಕ್ಷರಗಳಿಲ್ಲ...ಇದನ್ನು ನಮ್ಮ ಹಿರಿಯ ಸಾಹಿತಿಗಳು , ವಿದ್ವಾಂಸರು , ವಿಮರ್ಶಕರು ಈಗಾಗಲೇ ಒಪ್ಪಿಕೊಂಡಿದ್ದಾರೆ...ಅದಕ್ಕೆ ನನ್ನಲ್ಲಿ ಆಧಾರವೂ ಇದೆ...ಇನ್ನಾದರೂ ಮೋಹನ್ ಬೋಳಾರ್ ರವರ ಶುದ್ಧ ತುಳು ಲಿಪಿಯನ್ನು ನಮ್ಮ ನಿಮ್ಮೆಲ್ಲರ ಸಹಕಾರ , ಆಶೀರ್ವಾದದೊಂದಿಗೆ ಗುರುತಿಸೋಣ..ಮೂಲೆ ಗುಂಪು ಸೇರುವಂತೆ ಮಾಡದೆ ಮೋಹನ್ ಬೋಳಾರ್ ರವರೂ ಒಬ್ಬ ನಮ್ಮ ತುಳು ನಾಡಿನ ಶುದ್ಧ ತುಳುಲಿಪಿ ಅಕ್ಷರ ಸಂಶೋಧಕ ಎಂಬುವುದನ್ನು ನೆನೆಪಿಸೋಣ....( ಹಲವಾರು ಶಾಲೆಯ ಮಕ್ಕಳು ಈಗಾಗಲೇ ಮೋಹನ್ ಬೋಳಾರ್ ರವರ ತುಳು ಲಿಪಿಯನ್ನು ಕಲಿತು ಅಭ್ಯಾಸ ಮಾಡಿದ್ದಾರೆ) ...ವಿ . ಕೆ . ಕಡಬರವರ ಈ ಲೇಖನಕ್ಕೆ ಅಭಿನಂದನೆಗಳು.......
@Vidya Shree S Rai  
Nijavaagluvidhu tulu lipiye aagidhre kevala ee lipiyanne kalithavaru tulu lipiya thaadeyole athava granthadha kevala ondhu puta athava ondheradu saalu odhi helidhare naavu idhu tulu lipiyendhu oppikolluththeve. Alladhe malayala rahitha tulu ennuva badhalu tulu rahitha malayala lipi maadidhare olleyadhu. Eegaagale sikkiruva elle aadhaaragalu lipiyannu janaredhuru theredhitta punchiththaayaraadhiyaagi needidha ella lipigalu dharmasthala udupi matagalalliruva tulu lipigalu academy angeekarisidha lipiyantheye iruvudhu gamanisa bekaadha amsha.
@Shanthappa Babu 
ತುಳು ಲಿಪಿ ಶಾಲಾ ಕಾಲೇಜುಗಳಲ್ಲಿ ಕಲಿಸುತ್ತಿರುವವರು ಶ್ರೀ ಮತಿ ಜಿವಿಎಸ್ ಉಳ್ಳಾಲ್ ರವರು. ನನ್ನ ಗಮನಕ್ಕೆ ಬಂದ ಹಾಗೆ ಪ್ರಸ್ತುತ ಮಂಗಳೂರಿನ ರಾಮಕೃಷ್ಣ ಕಾಲೇಜಲ್ಲಿ ತರಗತಿ ನಡೆಸುತ್ತಿದ್ದಾರೆ. ಪೂರ್ತಿ ತರಗತಿ ಉಚಿತವಾಗಿ ಕಲಿಸುತ್ತಿದ್ದಾರೆ. ಅದರಲ್ಲಿ ಗೊತ್ತಾಗುತ್ತದೆ ಇವರಿಗೆ ತುಳು ಲಿಪಿ ಬಗ್ಗೆ ಇರುವ ಆಸಕ್ತಿ, ಬದ್ದತೆ.
ತುಳು ಲಿಪಿ ಬಗ್ಗೆ ಪುಸ್ತಕ ಪ್ರಕಟಿಸಿ ಸುಮ್ಮನೇ ಕುಳಿತು ಕೊಂಡರೆ ಯಾರಿಗೆ ಗೊತ್ತಾಗುತ್ತದೆ. ತುಳು ಲಿಪಿ ಪುಸ್ತಕದ ಪ್ರಕಟಿಸಲು ಜಿವಿಎಸ್ ರವರು ಪಟ್ಟ ಕಷ್ಟವನ್ನು ಕಣ್ಣಾರೆ ಕಂಡವನು ನಾನು. ನಾನು ನೋಡಿದ ಹಾಗೆ ಅವರು ಪುಸ್ತಕವನ್ನು ಮಾರದೆ ಉಚಿತವಾಗಿ ಕೊಟ್ಟಿದ್ದಾರೆ. ಈಗ ಹೇಳಿ ಬರಿ ಪ್ರಕಟಿಸಿ ಸುಮ್ಮನೇ ಕುಳಿತರೆ ಲಿಪಿ ಬಗ್ಗೆ ಇಷ್ಟು ಚರ್ಚೆ ನಡೆಯುತ್ತಿತ್ತಾ ?

ನೀವು ಕೂಡ ನಿಮ್ಮ ಅನಿಸಿಕೆಯನ್ನು ಇಲ್ಲಿ ಬರೆಯಬಹುದು
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:

Post a Comment