ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, May 14, 2015

ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ-vk kadaba

ನಿತ್ಯ ಬದುಕಿನಲ್ಲಿ ನಮ್ಮೆದುರು ಬೇರೆ ಬೇರೆ ರೀತಿಯ ಜನರು ನಮ್ಮ ಕಣ್ಣ ಮುಂದೆ ಸಿಗುತ್ತಾರೆ .ಹಾಗೆಯೇ ನನ್ನ ಈ ಮಾಧ್ಯಮ ಕ್ಷೇತ್ರದ  ಜೀವನದಲ್ಲಿ ಅನೇಕ ಕಣ್ಣು ಕಾಣದ ಕಲಾವಿದರನ್ನು ಸಂದರ್ಶನ ಮಾಡಿದ್ದೆ . ಇತ್ತೀಚಿಗೆ ನನಗೆ ಸಿಕ್ಕಿರುವ ಕಲಾವಿದೆ ಹರಿಣಾಕ್ಷಿ ಕುಲಾಲ್ ಎಕ್ಕೂರು.

ಸಂದರ್ಶನದ ಸಮಯದಲ್ಲಿ ನ್ನ ಜೊತೆ
ಏಳನೇ ತರಗತಿ ವರೆಗೆ ಹೋಗುವಾಗ ಕಣ್ಣು ಸರಿಯಾಗಿ ಕಾಣುತ್ತಿತ್ತು . ನಂತರದ ದಿನದಲ್ಲಿ ಕಣ್ಣು ತುರಿಕೆ ಬರಲು ಶುರುವಾಯಿತು .ಕ್ರಮೇಣ ಎರಡು ಕಣ್ಣು ಗಳು ಮುಚ್ಚಿ ಹೋದವು .ನಂತರ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಸಂತ ಅಲೊಶೀಯಸ್ ಕಾಲಿಜಿನ ಉಪನ್ಯಾಸಕಾರದ ಚಾಲ್ಸ್ ಪ್ರುಟಾದೊ ಅವರ ಒತ್ತಾಯದ ಮೇರೆಗೆ  ಬೆಂಗಳೂರಿನ ಮಿತ್ರಜ್ಯೋತಿ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದರು . ಡೋಲ್ ಮೇಕಿಂಗ್ ಜೊತೆಗೆ ಬಹಳ ಸಲಿಸಾಗಿ ಬೀಡಿಕಟ್ಟುತ್ತಾರೆ . ಸುಮಾರು ಆರು ತಿಂಗಳವರೆಗೆ ಭಾರನಾತ್ಯವನ್ನು ಅಭ್ಯಾಸ  ಮಾಡಿರುವ ಇವರು ಭರತನಾಟ್ಯ ಶಿಕ್ಷಕಿಯ ಮದುವೆಯ ಕಾರಣದಿ೦ದ  ಮುಂದುವರೆಸಲು ಅಸಾಧ್ಯವಾಯಿತು . ಕೆ ವಿ ರಮಣ್  ರವರಿಂದ ಸುಗಮ ಸಂಗೀತವನ್ನು ಅಭ್ಯಾಸ ಮಾಡಿ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ .  ಸಂಗೀತವನ್ನೇ ಹವ್ಯಾಸವಾಗಿಸಿಕೊಂಡು  ನಿತ್ಯವೂ  ಸಂತೋಷದ ಕ್ಷಣಗಳನ್ನು ಅನುಭವಿಸುವ ಇವರಿಗೆ  ತನ್ನ ಎರಡು ಕಣ್ಣು ಗಳು  ಇಲ್ಲ ಎನ್ನುವ ಚಿಂತೆ ಇಲ್ಲ . ತನ್ನ ಸ್ವಂತ ಮನೆಯೆಲ್ಲಿ ಇವರು ಒ೦ಟಿಯಾಗಿ ಇರುವ ಇವರು ನಿತ್ಯ ಪದಾರ್ಥ ಕ್ಕೆ ಬೇಕಾದ ತರಕಾರಿಗಳನ್ನು ಇವರೇ ರಡಿ ಮಾಡುತ್ತಾರೆ
.
 
  ಬೆಳಿಗ್ಗೆ  ತಿಂಡಿ ,ಕಾಫಿ  ಚಹಾ ಎಲ್ಲವನ್ನು ಯಾವುದೇ ಭಯವಿಲ್ಲದೆ ಮಾಡುತ್ತಾರೆ . ಗ್ಯಾಸ್ ಉರಿಸೋದು ನಮಗೆಲ್ಲ ಸಲ್ಪ ಕಷ್ಟದ ಮಾತಾದರೂ ಇವರಿಗೆ ಇದು ಸುಲಭ . ಬಿಸಿ ಬಿಸಿ ಚಹಾವನ್ನು ಮೇಲಕ್ಕೆ ಚಿಮ್ಮಿಸಿ ಇನ್ನೊಂದು ಗ್ಲಾಸಿಗೆ ಹಾಕಿ ಕೊಡುತ್ತಾರೆ .
ತ್ತೆ ಬಿಡುವಿನ ಸಮಯದಲ್ಲಿ  ಮನೆಯಲ್ಲಿ  ಸದಾ ರೇಡಿಯೊ  ಕೇಳುತ್ತಾ  ತಮ್ಮ ಕೆಲಸ ಮಾಡುತ್ತಾ ಇರುತ್ತಾರೆ . ಈಕೆ ಮಂಗಳ ಜ್ಯೋತಿ  ಶಾಲೆಯಲ್ಲಿ ಕ್ರಾಫ್ಟ್  ಶಿಕ್ಷಕಿಯಾಗಿ ಕೆಲಸ ನಿರ್ವಹಿಸುವ ಇವರು ಯಾರದಾರು ಸಹಾಯದಿನದ ಬಸ್ ಹಿಡಿಯುತ್ತಾರೆ . ಮನೆಯಿಂದ ಹೋಗುವಾಗ ನೆರೆಮನೆಯ ಹುಡುಗಿಯೋರ್ವಳು  ಪ್ರತಿ ದಿನ ಬಸ್ ಸ್ಟಾಂಡ್ ವರೆಗೆ ಕರೆದುಕೊಂಡು ಹೋಗುತ್ತಾರೆ . ಇವರಿಗೆ ಆರ್ಯಭಟ ಪ್ರಶಸ್ತಿ , ಡಾ .ಶಿವರಾಮ ಕಾರಂತ ಸದ್ಭಾವನ ಪ್ರಶಸ್ತಿ ,ಪುಟ್ಟರಾಜ್ ಗವಾಯಿ  ಸದ್ಭಾವನ ಪ್ರಶಸ್ತಿ ಲಭಿಸಿದೆ .ಇವರ ಜೊತೆಗಿನ ಮಾತುಕತೆ ಇಲ್ಲಿ ಕೇಳಿ.

No comments:

Post a Comment